ಮಾತಾ ಮಾಣಿಕೇಶ್ವರಿ ಜನ್ಮದಿನೋತ್ಸವ: ಉತ್ತಮ ಮಳೆ, ರೈತರ ಸಮೃದ್ಧಿಗೆ ವಿಶೇಷ ಪ್ರಾರ್ಥನೆ

ಜೇವರ್ಗಿ, ಜು. 29: ತಾಲೂಕಿನ ಚಿಗರಳ್ಳಿ ಗ್ರಾಮದ ಸುಕ್ಷೇತ್ರದಲ್ಲಿ ಮಾತಾ ಮಾಣಿಕೇಶ್ವರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ ಮಾತಾ ಮಾಣಿಕೇಶ್ವರಿ ಅಮ್ಮನವರ ಜನ್ಮದಿನೋತ್ಸವವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ಆಚರಿಸಲಾಯಿತು.
ಜಯಂತಿ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ನೆರವೇರಿಸಲಾಯಿತು. ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತ ಸಮುದಾಯ ಸಮೃದ್ಧಿಯಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಹಾಗೂ ಜನಜೀವನದಲ್ಲಿ ಸುಖ–ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಕಾಲದಲ್ಲಿ ಮಳೆಯಾಗುವಂತೆ ಭಕ್ತರು ದೇವಿಯಲ್ಲಿ ಪ್ರಾರ್ಥಿಸಿದರು.
ಕಾರ್ಯಕ್ರಮದ ಅಂಗವಾಗಿ ಭಕ್ತರು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪ್ರಸಾದ ಸ್ವೀಕರಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭಕ್ತಿ, ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರಲ್ಲಿ ಪರಸ್ಪರ ಸಹಕಾರ ಮತ್ತು ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಟ್ರಸ್ಟ್ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಟ್ರಸ್ಟ್ನ ಪದಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶೋಭಾ ಬಾಣಿ, ಶಿವಲಿಂಗಪ್ಪ ಕಿನ್ನೂರು, ವಸಂತ ನರಿಬೊಳಿ, ಡಾ. ಮಲ್ಲಿಕಾರ್ಜುನ ಮುಖ್ಕಾ, ಮೈಲಾರಿ ಗುಡೂರು, ಭೀಮರಾಯ ಜನಿವರ್, ರೇವಣಸಿದ್ದಪ್ಪ ಗೌಡ ಕಮಾನಮನಿ, ಶರಣಬಸಪ್ಪ ದೊಡ್ಡಮನಿ, ಮರೇಪ್ಪ ಕೊಳಕುರ, ಭಗವಂತರಾಯ ಬೆಣುರು, ಗುರು ಜೈನಾಪುರ, ಸಂತೋಷ್ ಜೈನಾಪುರ, ಗಿರೀಶ್ ತುಂಬಿಗಿ, ರಾಜು ತಳವಾರ, ಸೈಬಣ್ಣ ಜೇವರ್ಗಿ, ದೇವೇಂದ್ರ ಚಿಗರಳ್ಳಿ, ಕಾಂತಪ್ಪ ಚನ್ನೂರು, ಸಿದ್ದು ಕಮನಕೆರೆ, ಮಾಣಿಕ್ ಯಾಳವರ, ಚಂದ್ರಕಾಂತ ಗಾಂವ್ಹಾರ ಸೇರಿದಂತೆ ಅನೇಕ ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮವು ಭಕ್ತಿಪೂರ್ಣ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ಜನರ ಕಲ್ಯಾಣ ಮತ್ತು ಸಮಾಜದ ಒಳಿತಿಗಾಗಿ ಮುಂದೆಯೂ ಇಂತಹ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾತಾ ಮಾಣಿಕೇಶ್ವರಿ ಚಾರಿಟೇಬಲ್ ಟ್ರಸ್ಟ್ ತಿಳಿಸಿದೆ.



