ಜೇರಟಗಿ ಮೇ. ಸೋಮಜಾಳ ಕಾಟನ್ ಮಿಲ್ನಲ್ಲಿ ಸಿಸಿಐ ತುರ್ತು ಪ್ರಾರಂಭಕ್ಕೆ ಭೀಮ ಆರ್ಮಿ ಪ್ರತಿಭಟನೆ

ಕಲಬುರಗಿ : ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಮೇ. ಸೋಮಜಾಳ ಕಾಟನ್ ಮಿಲ್ನಲ್ಲಿ ಸಿಸಿಐ (CCI) ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸಬೇಕೆಂದು ಭೀಮ ಆರ್ಮಿ – ಭಾರತ ಏಕತಾ ಮಿಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಗ್ರಾಮದಲ್ಲಿರುವ ಕಾಟನ್ ಮಿಲ್ನಲ್ಲಿ ಸಿಸಿಐ ಖರೀದಿ ಕೇಂದ್ರ ಆರಂಭವಾಗದೆ ಇರುವುದರಿಂದ ಸುತ್ತಮುತ್ತಲಿನ ಹಳ್ಳಿಗಳ ಹತ್ತಿ ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 40–50 ಕಿಲೋಮೀಟರ್ ದೂರದ ಜೇವರ್ಗಿಗೆ ತೆರಳಿ ಹತ್ತಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಇದರಿಂದ ರೈತರು ಆರ್ಥಿಕ ಹಾಗೂ ಪ್ರಯಾಣ ತೊಂದರೆಯನ್ನು ಎದುರಿಸುತ್ತಿರುವುದನ್ನು ಮನವಿ ಪತ್ರದ ಮೂಲಕ ಅಧಿಕಾರಿಗಳಿಗೆ ತಿಳಿಸಲಾಯಿತು.
ಕೂಡಲೇ ರೀ-ಟೆಂಡರ್ ಮಾಡಿ, ಜೇರಟಗಿ ಮಿಲ್ನಲ್ಲಿ ಸಿಸಿಐ ಖರೀದಿ ಕೇಂದ್ರವನ್ನು 2–3 ದಿನಗಳಲ್ಲಿ ಆರಂಭಿಸಿ ರೈತರಿಗೆ ಉಪಶಮನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮನವಿ ತಾದೀರಿ ಆದರೆ 2–3 ದಿನಗಳ ನಂತರ ಎಲ್ಲ ರೈತರೊಂದಿಗೆ ಭೀಮ ಆರ್ಮಿ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯಲ್ಲಿ ಭೀಮ ಆರ್ಮಿ ಕರ್ನಾಟಕ ಜಿಲ್ಲಾಧ್ಯಕ್ಷ ಯಮನೇಶ ಎಂ. ಅಂಕಲಗಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರದೀಪ ಕಟ್ಟಿ, ಕರ್ನಾಟಕ ರೈತ ಘಟಕದ ಕಾರ್ಯಾಧ್ಯಕ್ಷ ಭೂತಾಳಿ ಕರಗೊಂಡ, ಭೀಮ ಆರ್ಮಿ ಜೇವರ್ಗಿ ಅಧ್ಯಕ್ಷ ಯಮನೇಶ ಹರವಾಳ, ಕರ್ನಾಟಕ ರೈತ ಘಟಕದ ಉಪಾಧ್ಯಕ್ಷ ಸಂಜೀವಕುಮಾರ ಕುಡಕಿ,
ಕನ್ನಡಪರ ಹೋರಾಟಗಾರ ದೇವೇಂದ್ರ ಮಯೂರ, ಬಸವರಾಜ ಕಣಮೇಶ್ವರ, ನಾಗೇಶ ಹರನಾಳ, ಬುದ್ದು ಅಂಕಲಗಿ, ಶಿವಕುಮಾರ ಕಡಗಂಚಿ, ಜೇಟ್ಟೆಪ್ಪ ಗೊಬ್ಬುರ, ರವಿ ಸಂಗೋಳಗಿ, ನಿಂಗಣ್ಣ ಹಾದಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



