ಕೋಲಿ,ಕಬ್ಬಲಿಗ ಸಮಾಜದ ಅಭಿವೃದ್ಧಿಗೆ ₹1.20 ಕೋಟಿ ಅನುದಾನ: ಡಾ. ಸಾಬಣ್ಣ ತಳವಾರ

ಕಲಬುರಗಿ: ಕೋಲಿ,ಕಬ್ಬಲಿಗ ಸಮಾಜದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಹಲವು ಕಾಮಗಾರಿಗಳಿಗೆ ಒಟ್ಟು ₹1.20 ಕೋಟಿ ಅನುದಾನ ಮಂಜೂರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಾಬಣ್ಣ ತಳವಾರ್ ಘೋಷಿಸಿದರು.
ಸೆಪ್ಟೆಂಬರ್ 23ರಂದು ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಶ್ರೀ ವಿಠ್ಠಲ್ ಹೇರೂರ ಮೆಟ್ರಿಕ್ ನಂತರದ ಉಚಿತ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ತಳವಾರ್ ಅವರು ಕಟ್ಟಡ ನಿರ್ಮಾಣಕ್ಕೆ ಮಾತ್ರವೇ ₹30 ಲಕ್ಷ ಅನುದಾನ ನೀಡಿರುವುದಾಗಿ ತಿಳಿಸಿದರು.
“ಕೋಲಿ,ಕಬ್ಬಲಿಗ ಸಮಾಜವು ಕಲಬುರಗಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು, ಹಿಂದುಳಿದ ಸ್ಥಿತಿಗತಿಗಳಲ್ಲಿದೆ. ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವು ಕಳೆದ ಏಳು ವರ್ಷಗಳಿಂದ ಪರಿಣಾಮಕಾರಿ ಸೇವೆ ನೀಡುತ್ತಿದೆ. ಅದರ ವಿಸ್ತರಣೆಗಾಗಿ ನಾವು ಬದ್ಧರಾಗಿದ್ದೇವೆ,” ಎಂದು ಅವರು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಮುಕ್ಕಾ ಅವರು, “ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಕಟ್ಟಡವು ಭವಿಷ್ಯದಲ್ಲಿ ಸಮಾಜದ ಶಕ್ತಿ ಕೇಂದ್ರವಾಗಲಿದೆ” ಎಂದು ಅಭಿಪ್ರಾಯಪಟ್ಟರು.ಶ್ಯಾಮ್ ಕುಮಾರ್ ಅವರು ಪ್ರಾಸ್ತಾವಿಕ ನುಡಿಗಳಲ್ಲಿ, “ಈ ವಸತಿ ನಿಲಯದ ಸೌಲಭ್ಯದಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಪ್ರಗತಿ ಸಾಧಿಸಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಿರಿಮಲ್ಲಪ್ಪ ಹರವಾಳ, ವೀರಣ್ಣ ಜಮಾದಾರ್, ಮಲ್ಲಿಕಾರ್ಜುನ ತಳಕೇರಿ, ಸುನಿಲ್ ಕಿನ್ನೂರ, ಚಂದ್ರಶೇಖರ ಕೊಟ್ರಗಸ್ತಿ, ಶರಣಬಸಪ್ಪ ದೊಡ್ಡಮನಿ, ಮಲ್ಲಪ್ಪ ಮನೆಗಾರ, ಯಲ್ಲಪ್ಪ ತಳವಾರ್, ಸಿದ್ದಣ್ಣ ಮುಕುರಂಬಿ, ವಿಜಯ್ ಕುಮಾರ್ ನಾಟಿಕರ್, ಡಾ. ರಾಮಕೃಷ್ಣ ಬಗ್ಗುರಿಗಿ, ಗೀತಾ ಸತೀಶಕುಮಾರ್, ಸೋಮರಾಯ ನಾಗಾವಿ, ನೀಲಕಂಠ ಜಮಾದಾರ, ದೇವೇಂದ್ರ ಚಿಗರಳ್ಳಿ, ಶ್ರೀಮಂತ ಮಾವನೂರ, ಸಂತೋಷ ತೋಟ್ನಳ್ಳಿ, ದಾದಾಸಾಹೇಬ್ ಹೋಸುರ, ಶಿವಶರಣಪ್ಪ ಜಮಾದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಲ್ಲಪ್ಪ ತಳವಾರ್ ನಿರೂಪಿಸಿದರು. ಮಲ್ಲಪ್ಪ ಮಾನೆಗರ್ ಸ್ವಾಗತಿಸಿದರು. ಸಿದ್ದಣ್ಣ ಮರಕುಂಬಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ವಿವರಗಳನ್ನು ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ದೊಡ್ಡಮನಿ ಮಾಧ್ಯಮಕ್ಕೆ ನೀಡಿದರು.