ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸೆಪ್ಟೆಂಬರ್ 28ರಂದು

ಕಲಬುರಗಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ. ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘ (ರಿ) ರಾಜಾಪೂರ, ಕಲಬುರಗಿ ವತಿಯಿಂದ ಸೆಪ್ಟೆಂಬರ್ 28, ರವಿವಾರದಂದು ರಂಗಾಯಣ ಸಭಾಭವನದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾಧಕ ಶಿಕ್ಷಕರಿಗೆ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಸಮಾಜ ಸೇವಕರಿಗೆ ಸಮಾಜ ಸೇವಾರತ್ನ ಪ್ರಶಸ್ತಿ, ಹಾಗೂ ಒಬ್ಬ ವಿದ್ಯಾರ್ಥಿಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಹಾಸ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಡಾ. ದಯಾನಂದ ಎಸ್. ಬಸವಪಟ್ಟಣ, ಡಾ. ವಿಜಯಕುಮಾರ ಶರಣಪ್ಪ, ಡಾ. ನಾಗರತ್ನ ಎಸ್., ಮಹಾನಂದ ವಿ. ಗಡ್ಡದ್, ಶ್ರೀದೇವಿ ಎಸ್. ಪಾಟೀಲ, ಸಂಗೀತ ಎ. ಉಪ್ಪಿನ (ಎಲ್ಲರೂ ಕಲಬುರಗಿ), ಶಹಾನಾ ಬೇಗಂ (ರಾಯಚೂರು), ಕುಮಾರಿ ವಿದ್ಯಾ ಎಲ್. ಅಯ್ಯಾಳಕರ (ಕಲಬುರಗಿ), ಸುರೇಶ್ ಎಸ್. ಮಾಳಗೆ (ಯಾದಗಿರಿ), ಕುಮಾರಿ ವಿದ್ಯಾಶ್ರೀ ಹೆಚ್ಚು ರಾಠೋಡ (ವಿಜಯಪೂರ), ಮಾಣಿಕಪ್ಪ ಹೆಚ್. ಚಿಂಚೋಳಿ (ಬೀದರ), ಪರಶುರಾಮ್ ಡಿ. ಬಿರಾದಾರ (ಕಲಬುರಗಿ), ಭೀರು ಎಸ್. ಪೂಜಾರಿ (ವಿಜಯಪೂರ) ಆಯ್ಕೆಗೊಂಡಿದ್ದಾರೆ.
ಸಮಾಜ ಸೇವಾರತ್ನ ಪ್ರಶಸ್ತಿಗೆ ಕಿರಣಕುಮಾರ (ಕಲಬುರಗಿ), ಗುಂಡಪ್ಪ ಎನ್., ಲಾಲಪ್ಪ ಎಸ್. ಜ್ಯೋತಿ, ಶಿವಪ್ರಕಾಶ್ ಎಂ. ಕಟ್ಟಿಮನಿ (ಎಲ್ಲರೂ ಚಿಂಚೋಳಿ), ಸುರೇಶ್ ಎಂ. ತೇಗಲತಿಪ್ಪಿ, ಸಂತೋಷ ಹೊಸಳ್ಳಿ (ಕಾಳಗಿ) ಆಯ್ಕೆಯಾಗಿದ್ದಾರೆ.
ಆದರ್ಶ ವಿದ್ಯಾರ್ಥಿ ಪ್ರಶಸ್ತಿಗೆ ಕುಮಾರಿ ಸಾವಿತ್ರಾ ಹುಲೇಪ್ಪ ಗಾರಂಪಳ್ಳಿ (ಚಿಂಚೋಳಿ) ಆಯ್ಕೆಗೊಂಡಿದ್ದಾರೆ.
ಈ ಕುರಿತು ಸಂಘದ ಅಧ್ಯಕ್ಷ ಪ್ರೊ. ರಮೇಶ್ ಬಿ. ಯಾಳಗಿ ಹಾಗೂ ಕಾರ್ಯದರ್ಶಿ ಯಲ್ಲಾಲಿಂಗ ದಂಡಿನ್ ಪ್ರಕಟಣೆ ನೀಡಿದ್ದಾರೆ.