ಕಲಬುರಗಿಜಿಲ್ಲಾಸುದ್ದಿ

ಕೇಂದ್ರ ಬಜೆಟ್‌ಗೆ ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಮೆಚ್ಚುಗೆ

ಚಿತ್ತಾಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 9ನೇ ಬಾರಿಗೆ ಬಜೆಟ್ ಮಂಡಿಸುವಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಈ ಬಾರಿ ಕರ್ಬಾಟಕ ರಾಜ್ಯಕ್ಕೆ 2 ಹೈಸ್ಪೀಡ್ ರೈಲು ಘೋಷಿಸಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ರಕ್ಷಣಾ, ಗೃಹ, ಕೃಷಿ ಸಾರಿಗೆ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ವಿಮೆ, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಎಐ ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಿರುವುದು ಹಾಗೂ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿರುವುದು ಸಂತಸ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕಾಗಿ 10 ಸಾವಿರ ಕೋಟಿ, ಬಯೋ ಫಾರ್ಮ ಗೆ 10 ಸಾವಿರ ಕೋಟಿ, ಚಾಂಪಿಯಾನಿಗಳಿಗಾಗಿ 10 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ.

ಕ್ರೀಡಾಪಟುಗಳಿಗೆ ಖೇಲ್ ಇಂಡಿಯಾ ಯೋಜನೆ ಘೋಷಣೆ, ಎಸ್‌ಎಚ್‌ ಇ ಮಾರ್ಟ್ ಗಳ ಮೂಲಕ ಮಹಿಳಾ ಸಬಲೀಕರಣ, ಮುಂದಿನ 5 ವರ್ಷದಲ್ಲಿ 20 ಹೊಸ ಜಲಮಾರ್ಗ ನಿರ್ಮಾಣದ ಯೋಜನೆ ಕಾರ್ಯ ನಡೆಯಲಿದೆ ಎಂದಿದ್ದಾರೆ.

ಅತಿವೃಷಿಯಿಂದ ತತ್ತರಿಸಿದ ದೇಶದ ರೈತ, ಕೃಷಿ ಸಾಲ ಮನ್ನಾ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿದ್ದು, ಅದು ಈಡೇರಲಿಲ್ಲ ಎಂಬ ತುಸು ನಿರಾಶೆಯ ಬೆನ್ನಲ್ಲೇ ಕರಾವಳಿ ಭಾಗದ ರೈತರು ಬೆಳೆಯುವ ಗೋಡಂಬಿ, ಕೋಕೋ, ತೆಂಗು ಮುಂತಾದ ಬೆಳೆಗಳಿಗೆ ಕೇಂದ್ರದ ಬೆಂಬಲದ ಅಭಯಹಸ್ತ ಹಾಗೂ ಸ್ವಾವಲಂಬಿ ಬದುಕು ರೈತನಿಗೆ ಸಂಧಾನ ತಂದಿದೆ. ತಂಬಾಕು, ಮದ್ಯದಂತಹ ಹಾನಿಕಾರಕ ಮಾದಕ ದ್ರವ್ಯಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿ 17 ಕ್ಯಾನ್ಸರ್ ಔಷಧಿಗಳ ಸುಂಕ ವಿನಾಯ್ತಿ ನೀಡಿದ್ದು, ಅದರಲ್ಲಿ 7 ಔಷಧಗಳ ಮೇಲೆ ತೆರಿಗೆಯನ್ನೇರದ್ದು ಮಾಡಿದ್ದು ಉತ್ತಮ. ಹೀಗೆ ಬಜೆಟ್ ನಲ್ಲಿ ಹಲವಾರು ಉಪಯುಕ್ತ ಯೋಜನೆ ನೀಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button