ಕಲಬುರಗಿಜಿಲ್ಲಾಸುದ್ದಿ

“ಕರ್ನಾಟಕ ಸೇವಾ ರತ್ನ” ಪ್ರಶಸ್ತಿಗೆ ದಿಲ್ ಶಾದಬಿ ಪಟೇಲ್-ಅಫಜಲಪುರದಲ್ಲಿ ಸನ್ಮಾನದ ಸಂಭ್ರಮ

ಅಫಜಲಪುರ: ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ, ಬೆಂಗಳೂರು ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಅಫಜಲಪುರ ಪಟ್ಟಣದ ಸರಕಾರಿ ಮಾದರಿ ಕನ್ಯಾ ಪ್ರಾಥಮಿಕ ಶಾಲೆಯ ಸಮರ್ಪಿತ ಶಿಕ್ಷಕಿ ಶ್ರೀಮತಿ ದಿಲ್ ಶಾದಬಿ ವಹಾಬ್ ಅಲಿ ಪಟೇಲ್ ಅವರಿಗೆ “ಕರ್ನಾಟಕ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಫಜಲಪುರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೈರುಳೆಸೆದರು. ಎಂ.ಎಂ. ಭಾರತ್ ಟಿವಿ ಆಯೋಜಕರಾದ ಡಾ. ಹುಸೇನ್ ಕೆರೂರ್, ಶ್ರೀ ಶ್ರೀ ಶ್ರೀ ಕೈಲಾಸನಂದ ಮಹಾಸ್ವಾಮಿಗಳು (ಬಾಗಲಕೋಟೆ), ಸಚಿವ ಶ್ರೀ ಬಿ.ಝೆಡ್. ಜಮೀರ್ ಅಹ್ಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (ದಾರವಾಡ), ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹಾಗೂ ಖ್ಯಾತ ಕನ್ನಡ ಚಲನಚಿತ್ರ ನಟ ಮದು ಬಾಲ ಅವರು ಉಪಸ್ಥಿತರಿದ್ದರು.

ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದು, ದಿಲ್ ಶಾದಬಿ ಪಟೇಲ್ ಅವರ ಕರ್ತವ್ಯನಿಷ್ಠೆ, ಸೇವಾಭಾವ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button