ಕಲಬುರಗಿಜಿಲ್ಲಾಸುದ್ದಿ
ಮನೆಗಳಲ್ಲಿ ನೀರು ನುಗ್ಗಿದ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

ಚಿತ್ತಾಪುರ: ಪಟ್ಟಣದ ಬಾಹರ್ ಪೇಟ್ ಹಾಗೂ ತಾಲೂಕಿನ ಗುಂಡಗುರ್ತಿ, ಬಳವಡಗಿ ಗ್ರಾಮಗಳಲ್ಲಿ ನೆರೆ ಪ್ರವಾಹದಿಂದ ಮನೆಗಳಲ್ಲಿ ನೀರು ನುಗ್ಗಿದ ಕುಟುಂಬಗಳಿಗೆ ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ವತಿಯಿಂದ ಕಳುಹಿಸಲಾದ 500 ಆಹಾರ ಧಾನ್ಯದ ಕಿಟ್ಗಳನ್ನು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಅವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಧಾಕೃಷ್ಣ ದೊಡ್ಡಮನಿ ಸದಾ ಬಡವರ ಪರ ಶ್ರಮಿಸುವ ನಾಯಕರು. ಬಡವರು ಯಾವ ಸಂಕಷ್ಟಕ್ಕೆ ಸಿಲುಕಿದರೂ ಕೂಡಲೇ ನೆರವು ಒದಗಿಸುವ ಮನಸ್ಸು ಅವರದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಸದಸ್ಯರು ಪ್ರಭು ಗಂಗಾಣಿ, ನಾಗು ಕಲ್ಲಕ್, ಮೈನೋದ್ದಿನ್, ಸುಭಾನ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.