ಪ್ರಹ್ಲಾದ ಜೋಶಿ 63ನೇ ಜನ್ಮದಿನದ ಅಂಗವಾಗಿ ನಿರಾಶ್ರೀತರಿಗೆ ಅನ್ನ–ಕಂಬಳಿ ವಿತರಣೆ”

ಕಲಬುರಗಿ:ರಾಷ್ಟ್ರೀಯ ಬಿ.ಜೆ.ಪಿ. ನಾಯಕರಾದ, ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ, ನವಿಕರಣ ಇಂಧನ, ಮತ್ತು ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿ ಜೀ ಅವರ 63ನೇ ಜನ್ಮದಿನದ ಪ್ರಯುಕ್ತ, ಕಲಬುರಗಿ ನಗರದ ಬಿದ್ದಾಪೂರ ಕಾಲನಿಯಲ್ಲಿರುವ ನಿರಾಶ್ರೀತರ ಪರಿಹಾರ ಕೇಂದ್ರದಲ್ಲಿ ಅನ್ನಸಂತರ್ಪಣೆ ಹಾಗೂ ಕಂಬಳಿ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸೇವಾ ಕಾರ್ಯಕ್ರಮದಲ್ಲಿ ನಿರಾಶ್ರಿತರಿಗೆ ಅನ್ನ, ಬಿಸಿ ಕಂಬಳಿಗಳನ್ನು ವಿತರಿಸಿ ಮಾನವೀಯ ಕಾಳಜಿಯ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಫರಹತಾಬಾದ ಕೇಸರಿ ಬೆಟ್ಟದ ಪರಮ ಪೂಜ್ಯ ಉಪಚಾರ್ಯ ರತ್ನ ಶ್ರೀ ಷ.ಬ್ರ., ಬಾಲ ತಪಸ್ವಿ ದ್ವಿತೀಯ ಸಾಂಬ ಶಿವಾಚಾರ್ಯ ಮಹಾಸ್ವಾಮಿಗಳು, ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಬಿಜೆಪಿ ಹಿರಿಯ ಮುಖಂಡ ಸುಭಾಷ್ ಬಿರಾದಾರ (ಕಮಲಾಪೂರ), ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಜಗದೀಶ್ ಹುನಗುಂದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾಗಿದ್ದ ಬಿಜೆಪಿ ಮುಖಂಡರು ಹಾಗೂ ಎ.ಬಿ.ಬಿ.ಎಮ್.ಎಸ್ ರಾಜ್ಯ ಕಾರ್ಯದರ್ಶಿ ಗುರುರಾಜ ಭರತನೂರ, ಅವಿನಾಶ್ ಕುಲಕರ್ಣಿ, ಮುಕುಂದ ದೇಶಪಾಂಡೆ (ಸೇಡಂ), ಬಸರಾಜ ಮದ್ರಿಕಿ, ಶಿವಾ ಅಷ್ಟಗಿ, ಗೋಪಾಲಕೃಷ್ಣ ಕುಲಕರ್ಣಿ, ಪ್ರದೀಪ್ ಕುಲಕರ್ಣಿ, ಮಂಜುನಾಥ್ ಕುಲಕರ್ಣಿ, ಪ್ರೀತಮ್ ಪಾಟೀಲ್, ನಾರಾಯಣ್ ಜಾಹಾಗಿರ್ದಾರ್, ಅಮಿತ್ ಕುಲಕರ್ಣಿ, ವೈಜೀನಾಥ್ ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿ ನಿರಾಶ್ರಿತರ ಜೊತೆ ಮಾನವೀಯತೆಯ ಸಂತಸದ ಕ್ಷಣಗಳನ್ನು ಹಂಚಿಕೊಂಡರು.
ಕಾರ್ಯಕ್ರಮವು ಸೇವೆ – ಪರೋಪಕಾರ – ಸಮಾಜ ಕಲ್ಯಾಣದ ಸಂದೇಶ ನೀಡುತ್ತಾ ಯಶಸ್ವಿಯಾಗಿ ನೆರವೇರಿತು.



