ಕಲಬುರಗಿಜಿಲ್ಲಾಸುದ್ದಿ

ಕಲಬುರಗಿ – ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ

ಕಲಬುರಗಿ: ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ವತಿಯಿಂದ ನೂತನವಾಗಿ ಆಯ್ಕೆಯಾದ ಕಲಬುರಗಿ – ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರು ಹಾಗೂ ನಿರ್ದೇಶಕರಿಗೂ ಅಭಿನಂದನಾ ಸಮಾರಂಭವನ್ನು ಕೈಲಾಸ ನಗರದಲ್ಲಿ ಹಮ್ಮಿಕೋಳಲಾಯಿತು.


ಕಲಬುರಗಿ – ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷ ವಿಠ್ಠಲ್. ವಿ. ಯಾದವ್, ನಿರ್ದೇಶಕರಾದ ಸುರೇಶ.ಆರ್. ಸಜ್ಜನ, ಬಸವರಾಜ ಪಾಟೀಲ್ ನರಬೋಳ, ಬಸವರಾಜ ಪಾಟೀಲ್ ಚಿಂಚೋಳ್ಳಿ, ಅಶೋಕ್. ಕೆ. ಸಾವಳೇಶ್ವರ ಇವರನ್ನು ಸನ್ಮಾನಿಸಲಾಯಿತು.


ಪ್ರಾಸ್ಥವಿಕವಾಗಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಅವರು ಮಾತನಾಡಿ ನಮ್ಮ ಸಮಾಜದ ಸನ್ಮಾನ ಸ್ವೀಕರಿಸಿದ ಅಧ್ಯಕ್ಷರು ಹಾಗೂ ನಿರ್ದೇಶಕರು ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿ ಅಭಿನಂದಿಸಿದರು.
ಕಲಬುರಗಿ – ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಹಕಾರ ಬ್ಯಾಂಕ್ ವಿಠ್ಠಲ್. ವಿ. ಯಾದವ್ ಅವರು ಮಾತನಾಡಿ ನಮ್ಮ ಅವಧಿಯಲ್ಲಿ ಉತ್ತಮವಾಗಿ ಅಭಿವೃದ್ಧಿ ಪಡಿಸುತ್ತೇವೆ. ರೈತರಿಗೆ ಸಾಲ ವಿತರಣೆ ಮಾಡುತ್ತೇವೆ. ರೈತರಿಗೆ ಉತ್ತೇಜನ ನೀಡಲಾಗುವುದು.ಬ್ಯಾಂಕ್ ನ ಕ್ರಿಯಾಶೀಲ ಇಡಲಾಗುವುದು ಎಂದು ಹೇಳಿದರು.


ಕಾಂಗ್ರೆಸ್ ಮುಖಂಡರಾದ ಶರಣು ಬುಸನೂರ, ಮಲ್ಲನಗೌಡ ಪೋಲಿಸ ಪಾಟೀಲ್ ಕಲಹಂಗರಗ, ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಪ್ರಿನ್ಸ್ ಅನಿಲ್ ನೆನೆಗಾರ, ಮಹಿಳಾ ಘಟಕದ ಕಲ್ಬುರ್ಗಿ ಜಿಲ್ಲಾಧ್ಯಕ್ಷೆ ಕು. ಭಾಗ್ಯಶ್ರೀ .ಎಮ್. ಪಾಟೀಲ್, ಯಾದಗಿರಿ ಜಿಲ್ಲಾಧ್ಯಕ್ಷ ಸಿದ್ದಲಿಂಗರೆಡ್ಡಿ ಯಾದಗಿರಿ, ಕಲ್ಬುರ್ಗಿ ಜಿಲ್ಲೆಯ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಪ್ರತೀಕ್ ಮಠಪತಿ ಇದ್ದರು. ಈ ಕಾರ್ಯಕ್ರಮವನ್ನು ಬಸಮ್ಮ ವೈದ್ಯ ಸ್ವಾಗತಿಸಿದರು, ಅಭಿ ಪಾಟೀಲ್ ನಿರೂಪಿಸಿದರು, ವಂದನಾರ್ಪಣೆಯನ್ನು ಶಂಕರಗೌಡ ಪಾಟೀಲ್ ಮಾಡಿದರು. ಮಂಗಲಾ ಕಂತಿ, ಸಂಗಮ್ಮ, ಬಸಮ್ಮ, ಕನ್ಯಾಕುಮಾರಿ, ಸದಾನಂದ, ಭಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button