ಚಿತ್ತಾಪುರ ಆರ್.ಎಸ್.ಎಸ್ ಪಥಸಂಚಲನ ಬಂದೋಬಸ್ತಗೆ ಅಂದಾಜು 1200 ಪೋಲಿಸರು, 52 ಸಿಸಿ ಕ್ಯಾಮೆರಾ
ಪಥಸಂಚಲನಕ್ಕೆ ಪೋಲಿಸರ ಹದ್ದಿನ ಕಣ್ಣು

ಚಿತ್ತಾಪುರ : ಆರ್.ಎಸ್.ಎಸ್ ಪಥಸಂಚಲನಕ್ಕೆ ಹೈಕೋರ್ಟ್ ನವೆಂಬರ್ 16 ರಂದು ಮಧ್ಯಾಹ್ನ 3 ಗಂಟೆಯಿAದ ಸಂಜೆ 5.30 ರವರೆಗೆ ಪಥಸಂಚಲನ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ಪೋಲಿಸರ್ ಸರ್ಪ ಗಾವಲು ಹಾಕಲಾಗಿದೆ.
ಪಟ್ಟಣದಲ್ಲಿ ಶನಿವಾರ ಪೋಲಿಸರು ಪಥಸಂಚಲನ ನಡೆಸಿದರು. ಪಥಸಂಚಲನದ ಬಂದೋಬಸ್ತಗಾಗಿ ಅಂದಾಜು 1200 ಪೋಲಿಸರನ್ನು ನಿಯೋಜಿಸಲಾಗಿದೆ.
ಹೈಕೋರ್ಟ್ ಕೆಲವು ಷರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿ ಆದೇಶಿಸಿರುವುದರಿಂದ ಭಾನುವಾರ ಆರ್ಎಸ್ಎಸ್ನಿಂದ ಪಥಸಂಚಲನ ಮಾರ್ಗಗಳಾದ ಬಜಾಜ್ ಕಲ್ಯಾಣ ಮಂಟಪನಿAದ, ಬಸ್ ನಿಲ್ದಾಣ, ಅಂಬೇಡ್ಕರ ವೃತ್ತ, ಸರ್ಕಾರಿ ಗ್ರಂಥಾಲಯ, ಬಸವ ಆಸ್ಪತ್ರೆ, ರಾಘವೇಂದ್ರ ಖಾನಾವಳಿ, ಕಾಶಿ ಗಲ್ಲಿಯ ಗಣೇಶ ಮಂದಿರ, ಕೆನರಾ ಬ್ಯಾಂಕ, ತಾಲೂಕು ಪಂಚಾಯತ ಕಚೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸವೇಶ್ವರ ವೃತ್ತದಿಂದ ಮರಳಿ ಬಜಾಜ್ ಕಲ್ಯಾಣ ಮಂಟಪ ಈ ಮಾರ್ಗದಲ್ಲಿಯೇ ಪಥ ಸಂಚಲನ ನಡೆಯಲಿದೆ.
ಪಥ ಸಂಚಲನ ಮಾರ್ಗ ಸೇರಿದಂತೆ ಪಟ್ಟಣದಲ್ಲಿ 52 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಹದ್ದಿನ ಕಣ್ಣು ಇಡಲಾಗಿದೆ.
ಅಪರ ಎಸ್ಪಿ-1, ಡಿವೈಎಸ್ಪಿ-5, ಸಿಪಿಐ-18, ಪಿಎಸ್ಐ-51, ಎಎಸ್ಐ-110, ಮುಖ್ಯಪೇದೆ ಹಾಗೂ ಪೇದೆ-501, ಗೃಹರಕ್ಷಕ ದಳ- 250, ಕೆಎಸ್ಆರ್ಪಿ ತುಕಡಿ-8, ಡಿಎಆರ್ ತುಕಡಿ-6, ಬಿಡಿಡಿಎಸ್- 1 ತಂಡ, ಎಎಸ್ಪಿ-1 ತಂಡ.
ಕಲಬುರಗಿ ಜಿಲ್ಲಾ ಪೋಲಿಸ್: ಅಪರ ಎಸ್ಪಿ-1. ಡಿವೈಎಸ್ಪಿ-3, ಸಿಪಿಐ- 10, ಪಿಎಸ್ಐ-36, ಎಎಸ್ಐ-71, ಮುಖ್ಯ ಪೇದೆ, ಪೇದೆ-313 = ಒಟ್ಟು 434.
ಬೀದರ ಜಿಲ್ಲಾ ಪೋಲಿಸ್: ಡಿವೈಎಸ್ಪಿ-1, ಸಿಪಿಐ-5, ಪಿಎಸ್ಐ-10, ಎಎಸ್ಐ-26, ಮುಖ್ಯ ಪೇದೆ, ಪೇದೆ-113 = ಒಟ್ಟು 155.
ಯಾದಗಿರಿ ಜಿಲ್ಲಾ ಪೋಲಿಸ್: ಡಿವೈಎಸ್ಪಿ-1, ಸಿಪಿಐ-3, ಪಿಎಸ್ಐ-5, ಎಎಸ್ಐ-13, ಮುಖ್ಯ ಪೇದೆ, ಪೇದೆ- 75 = ಒಟ್ಟು 97
ಗೃಹ ರಕ್ಷಕ ದಳ – 250 ಪಥಸಂಚಲನ ಕುರಿತು ರಾಜ್ಯದ ಗಮನ ಸೆಳೆದಿದ್ದು, ಎಲ್ಲರ ಚಿತ್ತ ಚಿತ್ತಾಪುರದತ್ತ ನೆಟ್ಟಿದೆ.



