ಕಲಬುರಗಿಜಿಲ್ಲಾಸುದ್ದಿ

“ಕೋಲಿ ಸಮಾಜಕ್ಕೆ ನ್ಯಾಯ ಒದಗಿಸಿ – ತಿಪ್ಪಣ್ಣಪ್ಪ ಕಮಕನೂರ ಅವರಿಗೆ ತಕ್ಷಣ ಸಚಿವ ಸ್ಥಾನ ನೀಡಿ: ನಿಂಗಪ್ಪ ದೇವಣಗಾಂವ”

ಸಿಎಂ ಸಿದ್ಧರಾಮಯ್ಯಗೆ ನೇರ ಆಗ್ರಹ :ಹಿಂದುಳಿದ ವರ್ಗಗಳ ಪರ ಹೋರಾಡುವ ನಾಯಕತ್ವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೋಲಿ ಸಮಾಜದ ಈ ನ್ಯಾಯಬದ್ದ ಬೇಡಿಕೆಯನ್ನು ತಕ್ಷಣ ಪರಿಗಣಿಸಿ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ದೇವಣಗಾಂವ ಒತ್ತಾಯಿಸಿದರು.

ಕಲಬುರಗಿ: ಕೋಲಿ ಸಮಾಜದ ನಾಯಕರಾದ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನಿಜವಾದ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಕೋಲಿ ಸೈನ್ಯದ ರಾಜ್ಯಾಧ್ಯಕ್ಷ ನಿಂಗಪ್ಪ ಆರ್. ದೇವಣಗಾಂವ ಆಗ್ರಹ ವ್ಯಕ್ತಪಡಿಸಿದ್ದಾರೆ.

“ಕೋಲಿ ಸಮಾಜಕ್ಕೆ ನ್ಯಾಯ ಕೊಡಬೇಕಾದರೆ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಮಂತ್ರಿಯಾಗಿಸುವುದು ಅನಿವಾರ್ಯ. ಸಮಾಜವನ್ನು ನಿರ್ಲಕ್ಷ್ಯ ಮಾಡುವ ಕ್ರಮ ಮುಂದುವರಿದರೆ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ,” ಎಂದು ಎಚ್ಚರಿಕೆ ನೀಡಿದರು.

ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರಿಸುವುದು ಸಮಾಜದ 30-40 ವರ್ಷಗಳ ಹೋರಾಟ.
ರಾಜ್ಯದಲ್ಲಿ ಕಾಂಗ್ರೆಸ್ ಹಲವಾರು ಬಾರಿ ಆಡಳಿತ ನಡೆಸಿದರೂ, ಈ ಮೂಲಭೂತ ಬೇಡಿಕೆ ಇದುವರೆಗೆ ಈಡೇರದಿರುವುದಕ್ಕೆ ದೇವಣಗಾಂವ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 40–50 ಲಕ್ಷ ಜನಸಂಖ್ಯೆ ಹೊಂದಿರುವ ಕೋಲಿ ಸಮಾಜ, ಕಾಂಗ್ರೆಸ್‌ ಪಕ್ಷಕ್ಕೆ ಪ್ರಮುಖ ಬೆಂಬಲ ನೀಡುತ್ತಾ ಬಂದಿದ್ದೇವೆ . “ಕಾಂಗ್ರೆಸ್ ಪಕ್ಷ ನಮ್ಮ ಮತ ಪಡೆದು ಅಧಿಕಾರಕ್ಕೆ ಬರುತ್ತದೆ, ಆದರೆ ಸಚಿವ ಸ್ಥಾನ ಹಾಗೂ ರಾಜಕೀಯ ಪ್ರತಿನಿಧಿತ್ವ ನೀಡುವಲ್ಲಿ ವಿಫಲವಾಗುತ್ತದೆ,” ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬ ಕೋಲಿ ಸಮಾಜದ ಸಚಿವ ಇಲ್ಲದಿರುವುದು, ನಾಚಿಕೆಗೇಡಿನ ಸಂಗತಿಯಾಗಿದೆ ಆದರೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ತಿಪ್ಪಣ್ಣಪ್ಪ ಕಮಕನೂರ ಸಚಿವರನ್ನಾಗಿ ಮಾಡಿ ಕೋಲಿ ಸಮಾಜಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ದೇವಣಗಾಂವ ಆಗ್ರಹಿಸಿದ್ದಾರೆ

ಈ ಸಮುದಾಯಕ್ಕೆ ಪ್ರತಿನಿಧಿತ್ವ ನೀಡದೆ ಇರುವುದರಿಂದ ಪಕ್ಷ ತನ್ನ ಶಕ್ತಿ ನೆಲೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ದೇವಣಗಾಂವ ಎಚ್ಚರಿಕೆಯನ್ನು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button