ಕಲಬುರಗಿಜಿಲ್ಲಾಸುದ್ದಿ
ಶ್ರೀಮತಿ ಕಾಶಿಬಾಯಿ ಪ್ರವೀಣಕುಮಾರ ಚವ್ಹಾಣ ಅವರಿಗೆ ಸೇವಾ ರತ್ನ ಪ್ರಶಸ್ತಿ ಗೌರವ

ಅಫಜಲಪುರ: ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆ ಅಫಜಲಪುರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಉತ್ತಮ ಕೆಲಸ ಮಾಡಿದ ತಾಲೂಕ ಭೂ ಮಾಪನ ಇಲಾಖೆಯ ಸರ್ಕಾರಿ ನೌಕರಾದ ಶ್ರೀಮತಿ ಕಾಶಿಬಾಯಿ ಪ್ರವೀಣಕುಮಾರ ಚವ್ಹಾಣ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಕ.ರಾ.ಸ.ಸೌ.ಸಂಘದ ತಾಲೂಕಾಧ್ಯಕ್ಷ ಸಂಜೀವ ಬಗಲಿ , ನೌಕರರ ಜಿಲ್ಲಾಧ್ಯಕ್ಷರಾದ ಬಸವರಾಜ ಬಳೂಂಡಗಿ,ಡಾ.ರವಿಕಾಂತಿ ಕ್ಯಾತಿಹಾಳ ಸೇರಿದಂತೆ ಅನೇಕರಿದ್ದರು.



